ಕಳೆದ ಕೆಲ ದಿನಗಳಿಂದ ದೆಹಲಿ ಮತ್ತು ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿರುವ ವ್ಯಾಪಾರ ಅಂದರೆ ಕುದುರೆ ವ್ಯಾಪಾರ. ಪ್ರಜಾತಂತ್ರವೆಂಬ ನಾಟಕರಂಗದಲ್ಲಿ ಪ್ರಜೆಯೇ ದೊರೆ, ಪ್ರಜಾಪ್ರತಿನಿಧಿಯೇ ದೇವರು. ಎಲ್ಲಕ್ಕೂ ಸಂಖ್ಯಾಬಲವೇ ಮುಖ್ಯ ಆಧಾರ. ಅಧಿಕಾರ ಪಡೆಯಲು ಮತ್ತು ಉಳಿಸಲು ಬೇಕಾದ ಪ್ರಜಾಪ್ರತಿನಿಧಿಗಳನ್ನು ಮಾರುವವರ, ಕೊಳ್ಳುವವರ, ವ್ಯಾಪಾರ ಕುದುರಿಸುವ ದಲ್ಲಾಳಿಗಳ ಚಟುವಟಿಕೆ ಕಳೆದ ಕೆಲವು ವಾರಗಳಿಂದ ಭರಾಟೆಯಾಗಿ ಸಾಗಿದೆ. ಅತ್ತ ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ನಮ್ಮ ಪ್ರಧಾನಿಗಳು ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಎಡ ಪಕ್ಷಗಳು ಹೋದವು, ಸಮಾಜವಾದಿ ಪಕ್ಷ ಬಂತು, ಮಾಯಾವತಿ ಮಾಯ, ದೇವೇಗೌಡ ಪ್ರತ್ಯಕ್ಷ. ನಿತ್ಯ ನಡೆಯುತ್ತಿರುವ ಈ ನಾಟಕ "ಕ್ಯೊಂ ಕಿ ಸಾಸ್ ...." ಗಿಂತ ಜನಪ್ರಿಯವಾಗಿದೆ.
ಇತ್ತ ಬೆಂಗಳೂರಿನಲ್ಲಿ ಅಧಿಕಾರ ಪಡೆಯಲು ನಮ್ಮ ಮುಖ್ಯಮಂತ್ರಿಗಳು ಮೊದಲು ಪಕ್ಷೇತರರ ಬೇಟೆಯಾಡಿದರು. ನಂತರ ಪಕ್ಷಾಂತರಿಗಳ ಸರದಿ. ಅಧಿಕಾರಕ್ಕಾಗಿ ಏನುಬೇಕಾದರೂ ಮಾಡಬಹುದು. ಕರ್ನಾಟಕ ರಾಜಕೀಯದಲ್ಲಿ ಇದು ಹೊಸ ಪದ್ಧತಿ. ಅಲ್ಲಿ ಕಾಂಗ್ರೆಸ್ ಮಾಡುತ್ತಿರುವ ಕೆಲಸವನ್ನು ಇಲ್ಲಿ ಬಿಜೆಪಿ ಮಾಡುತ್ತಿದೆ. ಅಲ್ಲಿ ಕಲಾಮ್, ಸೋನಿಯಾ ಮಾಡುತ್ತಿರುವ ಕೆಲಸವನ್ನು ಇಲ್ಲಿ ನಮ್ಮ ಗಣಿ ಧಣಿಗಳು, ಮಠಾಧೀಶರು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಕ್ಷವೂ ಒಂದೇ. ಎಲ್ಲ ಪ್ರತಿನಿಧಿಗಳೂ ಒಂದೇ.
ಅಧಿಕಾರ ಮೊದಲು, ಹಣ ನಂತರ, ಇನ್ನು ಸಮಯ ಉಳಿದಿದ್ದರೆ ದೇಶ, ಜನ ಎಲ್ಲ. ಇರಲಿ ಕಾದು ನೋಡೋಣ ತೆರೆಯ ಮೇಲೆ ಮುಂದಿನ ಭಾಗವನ್ನ. ಹಿಂದೆಂದೂ ನಡೆದಿರದ ಕುತೂಹಲ ಭರಿತ ಕಥಾನಕ...
"ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವಾ ಜಗವೆಲ್ಲ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ" ಎಂಬ ನಮ್ಮ ಕವಿವಾಣಿ ಎಷ್ಟು ಸತ್ಯ ಅಲ್ಲವೇ?
ಜೈ ಕರ್ಣಾಟಕ ... ಜೈ ಭಾರತಾಂಬೆ.... ಜೈ ಪ್ರಜಾತಂತ್ರ.........
Wednesday, July 9, 2008
Wednesday, July 2, 2008
ಗಣ್ಯರ ಸಾವಿನ ಸುತ್ತ ಮುತ್ತ ...
ಇತ್ತೀಚಿಗೆ ನಿಧನರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ಅಂತ್ಯಕ್ರಿಯೆಯ ಸುತ್ತ ಕವಿದಿದ್ದ ವಿವಾದದ ಸಾರ ಸರ್ಕಾರ ವೀರ ಯೋಧನಿಗೆ ಉಚಿತ ಮರ್ಯಾದೆಗಳನ್ನು ಕೊಡದೆ ಅವರಿಗೆ ಅವಮಾನ ಮಾಡಿತು ಎನ್ನುವುದು. ಹಾಗೆ ನೋಡಿದರೆ ಬಹುತೇಕ ಗಣ್ಯರ ಸಾವು ವಿವಾದದಲ್ಲಿ ಇಲ್ಲವೇ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲಿ ಕೊನೆಗಾನುವುದನ್ನು ನಾವು ಕಾಣುತ್ತೇವೆ. ಇಂದಿರಾ ಗಾಂಧಿಯವರ ಸಾವಿನ ನಂತರ ನಡೆದ ಘಟನೆಗಳು ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ನಿಂತಿದೆ. ಒಂದೇ ರಾತ್ರಿಯಲ್ಲಿ ಸುಮಾರು ೨೦೦೦೦ ಸಿಕ್ಕರ ರಕ್ತದಿಂದ ದೆಹಲಿ ನಗರ ತೊಯ್ದು ಹೋಯಿತು. ನಟ ಎಂ.ಜಿ.ಅರ್. ನಿಧನದ ನಂತರ ಆತ್ಮಹತ್ಯೆ ಮಾಡಿಕೊಂಡವ ಸಂಖ್ಯೆ ಎಷ್ಟೋ.
ಡಾ.ರಾಜಕುಮಾರ್ ನಿಧನದ ನಂತರ ಬೆಂಗಳೂರಿನಲ್ಲಿ ನಡೆದ ಘಟನೆಗಳು ಕನ್ನಡಿಗರ ಚರಿತ್ರೆಯಲ್ಲಿ ದಾಖಲಾಗಿದೆ. ಅವಕಾಶವಾದಿ ಸಮಾಜ ಘಾತುಕ ಶಕ್ತಿಗಳು ಇಂತಹ ಸಮಯದ ಪ್ರಯೋಜನವನ್ನು ಹೇಗೆ ಪಡೆದರು ಎನ್ನುವ ವಿಷಯ ನಮಗೆಲ್ಲ ತಿಳಿದಿದೆ. ಈ ಎಲ್ಲ ಸಂಧರ್ಭಗಳಿಂದ ನಾವು ಕಲಿಯಬೇಕಾದೆ ಪಾಠ ಏನಾದರೂ ಇದೆಯೇ ಎನ್ನುವುದು ನಾನು ಚರ್ಚಿಸುತ್ತಿರುವ ವಿಷಯ.
ಭಾರತದಲ್ಲಿ ಸಾಂಪ್ರದಾಯಿಕವಾಗಿ ಸಾವು ಮತ್ತು ಸಾವಿನ ಸಂಬಂಧಿ ವಿಷಯಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಬಗ್ಗೆ ಮಾತನಾದುವುದಿರಲಿ, ಚಿಂತಿಸುವುದೂ ನಿಷಿದ್ಧ. ಇತ್ತೀಚೆಗಷ್ಟೇ ನಾವು ಇನ್ಶುರನ್ಚೆ, ವಿಲ್ ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿಗೂ ನಮ್ಮ ಸಾಂಪ್ರದಾಯಿಕ ಕುಟುಂಬಗಳಲ್ಲಿ ಕುಟುಂಬದ ಮುಖ್ಯಸ್ಥರನ್ನು ವಿಲ್ ಮಾಡಿದ್ದೀರಾ ಎಂದು ಮಕ್ಕಳು ಕೀಳುವ ಧೈರ್ಯ ಮಾಡಲಾರರು. ಅದೇನಿದ್ದರು ವಿವೇಕಿ ಹಿರಿಯರು ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇಂತಹ ಸಮಾಜದಲ್ಲಿ ನಾನು ಸೂಚಿಸುತ್ತಿರುವ ವಿಷಯ funeral planning ಬಗ್ಗೆ.
ಸರ್ಕಾರ ಗಣ್ಯ ವ್ಯಕ್ತಿಗಳ ನಿಧನಾನಂತರ ನಡೆಯುವ ಕಾರ್ಯಕ್ರಮಗಳನ್ನು ಮೊದಲೇ ನಿರ್ಧರಿಸಿದರೆ ಬಹಳ ಸಮಸ್ಯೆಗಳು ಉಂಟಾಗುವುದೇ ಇಲ್ಲ. ನಿಜ ಎಲ್ಲ ಸಾವೂ ನಿರೀಕ್ಷಿತವಲ್ಲ, ಆದರೆ ಎಲ್ಲರ ಸಾವೂ ಖಚಿತ ತಾನೆ? ಕೆಲವು ಸಂದರ್ಭದಲ್ಲಿ ಗಣ್ಯರು ಹಲವಾರು ದಿನದ ಆಸ್ಪತ್ರೆಯ ವಾಸದ ನಂತರ ನಿಧನರಾದಾಗಳೂ ಸಹ ಅವರ ಅಂತ್ಯಕ್ರಿಯೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಅವರ ಅಂತಿಮ ದರ್ಶನಕ್ಕೆ ಎಷ್ಟು ಜನಬರಬಹುದೆಂಬ ಅಂದಾಜು ನಮಗಿರುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದು ನಂತರದ ಮಾತು.
ಇದು ಅತಿ ಸಣ್ಣ ವಿಚಾರ. ಸರ್ಕಾರ ಮಾಡಬೇಕಾದ ಮುಖ್ಯ ಕೆಲಸಗಳು ಇದಕ್ಕಿಂತ ಬಹಳ ಇವೆ ಅಂದಿರಾ? ಅದೂ ನಿಜ ಅನ್ನಿ...
ಡಾ.ರಾಜಕುಮಾರ್ ನಿಧನದ ನಂತರ ಬೆಂಗಳೂರಿನಲ್ಲಿ ನಡೆದ ಘಟನೆಗಳು ಕನ್ನಡಿಗರ ಚರಿತ್ರೆಯಲ್ಲಿ ದಾಖಲಾಗಿದೆ. ಅವಕಾಶವಾದಿ ಸಮಾಜ ಘಾತುಕ ಶಕ್ತಿಗಳು ಇಂತಹ ಸಮಯದ ಪ್ರಯೋಜನವನ್ನು ಹೇಗೆ ಪಡೆದರು ಎನ್ನುವ ವಿಷಯ ನಮಗೆಲ್ಲ ತಿಳಿದಿದೆ. ಈ ಎಲ್ಲ ಸಂಧರ್ಭಗಳಿಂದ ನಾವು ಕಲಿಯಬೇಕಾದೆ ಪಾಠ ಏನಾದರೂ ಇದೆಯೇ ಎನ್ನುವುದು ನಾನು ಚರ್ಚಿಸುತ್ತಿರುವ ವಿಷಯ.
ಭಾರತದಲ್ಲಿ ಸಾಂಪ್ರದಾಯಿಕವಾಗಿ ಸಾವು ಮತ್ತು ಸಾವಿನ ಸಂಬಂಧಿ ವಿಷಯಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಬಗ್ಗೆ ಮಾತನಾದುವುದಿರಲಿ, ಚಿಂತಿಸುವುದೂ ನಿಷಿದ್ಧ. ಇತ್ತೀಚೆಗಷ್ಟೇ ನಾವು ಇನ್ಶುರನ್ಚೆ, ವಿಲ್ ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿಗೂ ನಮ್ಮ ಸಾಂಪ್ರದಾಯಿಕ ಕುಟುಂಬಗಳಲ್ಲಿ ಕುಟುಂಬದ ಮುಖ್ಯಸ್ಥರನ್ನು ವಿಲ್ ಮಾಡಿದ್ದೀರಾ ಎಂದು ಮಕ್ಕಳು ಕೀಳುವ ಧೈರ್ಯ ಮಾಡಲಾರರು. ಅದೇನಿದ್ದರು ವಿವೇಕಿ ಹಿರಿಯರು ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇಂತಹ ಸಮಾಜದಲ್ಲಿ ನಾನು ಸೂಚಿಸುತ್ತಿರುವ ವಿಷಯ funeral planning ಬಗ್ಗೆ.
ಸರ್ಕಾರ ಗಣ್ಯ ವ್ಯಕ್ತಿಗಳ ನಿಧನಾನಂತರ ನಡೆಯುವ ಕಾರ್ಯಕ್ರಮಗಳನ್ನು ಮೊದಲೇ ನಿರ್ಧರಿಸಿದರೆ ಬಹಳ ಸಮಸ್ಯೆಗಳು ಉಂಟಾಗುವುದೇ ಇಲ್ಲ. ನಿಜ ಎಲ್ಲ ಸಾವೂ ನಿರೀಕ್ಷಿತವಲ್ಲ, ಆದರೆ ಎಲ್ಲರ ಸಾವೂ ಖಚಿತ ತಾನೆ? ಕೆಲವು ಸಂದರ್ಭದಲ್ಲಿ ಗಣ್ಯರು ಹಲವಾರು ದಿನದ ಆಸ್ಪತ್ರೆಯ ವಾಸದ ನಂತರ ನಿಧನರಾದಾಗಳೂ ಸಹ ಅವರ ಅಂತ್ಯಕ್ರಿಯೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಅವರ ಅಂತಿಮ ದರ್ಶನಕ್ಕೆ ಎಷ್ಟು ಜನಬರಬಹುದೆಂಬ ಅಂದಾಜು ನಮಗಿರುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದು ನಂತರದ ಮಾತು.
ಇದು ಅತಿ ಸಣ್ಣ ವಿಚಾರ. ಸರ್ಕಾರ ಮಾಡಬೇಕಾದ ಮುಖ್ಯ ಕೆಲಸಗಳು ಇದಕ್ಕಿಂತ ಬಹಳ ಇವೆ ಅಂದಿರಾ? ಅದೂ ನಿಜ ಅನ್ನಿ...
Subscribe to:
Posts (Atom)