Thursday, August 21, 2008

ಎಲ್ಲಕ್ಕೂ ಮೊದಲು.......

ಇಂದು ಇನ್ಫೋಸಿಸ್ ನಾರಾಯಣ ಮೂರ್ತಿಯವರು "ನಮ್ಮ ದೇಶಕ್ಕೆ ಪ್ರತಿಭೆಯನ್ನು ಆಕರ್ಷಿಸುವುದು ನಮ್ಮ ಮೂಲಭೂತ ಸೌಕರ್ಯಗಳನ್ನು ಕಟ್ಟುವುದಕ್ಕಿಂತ ಮುಖ್ಯ" ಎನ್ನುವ ಮಾತನ್ನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಐಟಿ ಬಿಟಿ ಪ್ರಮುಖರ ಉವಾಚಗಳೆಲ್ಲ ಇದು ಮುತ್ತಿನಂತ ಮಾತು.

ನಮ್ಮ ಜನಕ್ಕೆ ಇಂದು ಮುಖ್ಯವಾಗಿ ಬೇಕಿರುವುದು ಜ್ಞಾನಾರ್ಜನೆ. ವಿದ್ಯಾರ್ಜನೆಗಿಂತ ಮುಖ್ಯವಾದುದು. ನಮ್ಮ ಹಿಂದಿನ ಶಿಕ್ಷಣ ಪದ್ಧತಿ ಮನುಷ್ಯರನ್ನು ವಿದ್ಯಾವಂತರನ್ನಾಗಿಯೂ ಜ್ನಾನವಂತಂತರನ್ನಾಗಿಯೂ ಮಾಡುತ್ತಿತ್ತು. ಆದರೆ ನಮ್ಮ ಇಂದಿನ ಶಿಕ್ಷಣ ಜನರನ್ನು ಅಕ್ಷರಸ್ತರನ್ನಾಗಿ ಮಾಡುತ್ತಿದೆಯೇ ಹೊರತು ವಿದ್ಯಾವಂತರನ್ನಾಗಿ ಯಾ ಜ್ನಾನವನ್ತರನ್ನಾಗಿಯೂ ಅಲ್ಲ. ನಮಗೆ ಇಂದು ರಸ್ತೆಗಳಿಗಿಂತ ಮುಖ್ಯವಾಗಿ ಬೇಕಿರುವುದು ರಸ್ತೆಯಲ್ಲಿ ಓಡಾಡುವ ಜನರ ತಲೆಯಲ್ಲಿ ಸ್ವಲ್ಪ ಬುದ್ದಿ, ವಿವೇಕ.

ಈ ಭ್ರಷ್ಟ ರಾಷ್ಟ್ರದಲ್ಲಿ ಮೂರು ಪದಕವನ್ನು ಒಲಂಪಿಕ್ ನಲ್ಲಿ ಪಡೆಯಲು ಪ್ರತಿಭೆ ಕಾರಣ, ವ್ಯವಸ್ಥೆ ಅಲ್ಲ. ನಿಜ ಉತ್ತಮ ವ್ಯವಸ್ಥೆಯಲ್ಲಿ ಪ್ರತಿಭೆಗಳು ಬೆಳೆಯುತ್ತವೆ. ಆದರೆ ಪ್ರತಿಭೆಯೇ ಉತ್ತಮ ವ್ಯವಸ್ಥೆಯನ್ನು ಸೃಷ್ಟಿಸಲು ಬೇಕಿರುವ ಮೂಲಧಾತು. ಹಿಟ್ಲರನ ಅಟ್ಟಹಾಸದ ಮಧ್ಯೆ ಐನಸ್ಟೀನ್ ಮುಂತಾದ ಯಹೂದ್ಯರು ಬೆಳೆಯಲಿಲ್ಲವೇ?

ನಮಗೆ ಸಾಫ್ಟ್ ವೇರ್ ಕಂಪನಿಗಳಿಗಿಂತ ಮುಖ್ಯವಾಗಿ ಬೇಕಿರುವುದು ಸಾಫ್ಟ್ ವೇರ್ ಬರೆಯಬಲ್ಲ ಪ್ರತಿಭಾವಂತರು. ನಮಲ್ಲಿ ಗೂಗಲ್ಲಿ ಗಿಂತ ಉತ್ತಮ ಸಾಫ್ಟ್ ವೇರ್ ಬರೆಯಬಲ್ಲ ಜನ ಇದ್ದರೆ ನಾವೇ ಭವಿಷ್ಯದ ಗೂಗಲನ್ನು ಸ್ಥಾಪಿಸಬಹುದಲ್ಲ. ನಮಲ್ಲಿ ಪ್ರತಿಭೆ ಇದೆ ಪ್ರತಿಭಾವಂತರು ಇಲ್ಲ.

ಈಗಾಲಾದರೂ ನಾವು ನಮ್ಮ ಜನಕ್ಕೆ ಗೆಲ್ಲುವ ಹುಚ್ಚು ಸಾಧಿಸುವ ಹುಚ್ಚು ಹಿಡಿಸುವ ಪ್ರಯತ್ನ ಮಾಡೋಣವೆ ?

Tuesday, August 5, 2008

ಬೆಂಗಳೂರು ಮತ್ತು ವಿದ್ಯುತ್

ಕಳೆದ ಎರಡು ವಾರದಿಂದ ನನಗೆ ಬ್ಲಾಗಿಸಲು ಸಾಧ್ಯವಾಗಲಿಲ್ಲ. ಕಾರಣ ನನ್ನ ಕಾರ್ಯಕ್ರಮ ಅಲ್ಲ. ಬೆಂಗಳೂರಿನ ವಿದ್ಯುತ್ ಪರಿಸ್ಥಿತಿ. ನಾವು ಜಗತ್ತಿನ ಮುಂದುವರಿದ ರಾಷ್ಟ್ರಗಳ ಜೊತೆ ಮಾಹಿತಿ ತಂತ್ರಜ್ಞಾನ ಮತ್ತು ಇತರೆ ವಿಷಯಗಳಲ್ಲಿ ಪೈಪೋಟಿಗೆ ಇಳಿದಿದ್ದೇವೆ. ಈ ಕ್ಷೇತ್ರಗಳಲ್ಲಿ ನಡೆದಿರುವ ಪ್ರಗತಿಗೆ ನಮಗೆ ನಾವೇ ಬೆನ್ನು ತಟ್ಟಿ ಕೊಳ್ಳುತ್ತೇವೆ. ಆದರೆ ಒಂದು ತಿಂಗಳು ಮಳೆ ಬಾರದಿದ್ದರೆ ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ.

ನಮ್ಮ ರಸ್ತೆಗಳು ಸುಧಾರಿಸಲು ಇನ್ನೂ ೫ ವರ್ಷ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ವಿದ್ಯುತ್ ಈ ಎಲ್ಲ ಕ್ಷೇತ್ರಗಳ ಜೀವ ನಾಡಿ. ಬರೀ ಕಛೇರಿಗಳಲ್ಲಿ ಜನರೇಟರ್ ಇದ್ದರೆ ಸಾಕೆ? ಅದಕ್ಕೆ ಡೀಸಲ್ ಬೇಕಲ್ಲ. ಮತ್ತು ಮನೆಯಲ್ಲಿ ಕೆಲಸ ಮಾಡುವವರ, ಸಣ್ಣ ಪ್ರಮಾಣದ ಉದ್ದಿಮೆ ನಡೆಸುವವರ ಪಾಡೇನು?

ಕಳೆದ ತಿಂಗಳು ಗುಜರಾತ್ ಮುಖ್ಯ ಮಂತ್ರಿ ಮೋದಿ ಗುಜರಾತ್ ಕೇಂದ್ರಕ್ಕೆ ಕೊಡುತ್ತಿರುವ ಹಣದಬಗ್ಗೆ ಮತ್ತು ಅದಕ್ಕೆ ಆ ರಾಜ್ಯಕ್ಕೆ ಸಿಗುತ್ತಿರುವ ಸುಕರ್ಯಗಳ ಬಗ್ಗೆ ಮಾತನಾಡಿದರು. ಕಳೆದ ವಾರ ನನ್ನ ಸ್ನೇಹಿತನೊಬ್ಬ ತನ್ನ ಮನೆಯ ಸುತ್ತ ಇರುವ ರಸ್ತೆಯ ಪರಿಸ್ಥಿತಿಯ ಬಗ್ಗೆ ಇದೇ ತರಹದ ಮಾತನಾಡಿದ. ಕಳೆದ ವರ್ಷದಲ್ಲಿ ನಾನೊಬ್ಬನೇ ಸುಮಾರು ೧೦ ಲಕ್ಷ ಆದಾಯ ತೆರಿಗೆ ಪಾವತಿ ಮಾಡಿದ್ದೇನೆ. ಬರೀ ನನ್ನ ಹಣದಿಂದಲೇ ಈ ರಸ್ತೆಯ ದುರಸ್ತಿ ಸಾಧ್ಯವಾಗುತ್ತಿತ್ತು. ಈ ಬಗ್ಗೆ ನಾವು ಯೋಚಿಸಬೇಕಲ್ಲವೇ?