ಇನ್ನೂ ಬಗೆಹರಿದಿಲ್ಲ ಮೇಲುಕೋಟೆಯ ನಾಮ ವಿವಾದ. ದೇವರಿಗೆ ನಾಮ ಹಾಕುವುದೇ ನಿಜವಾದರೆ ಯಾವ ನಾಮ ಹಾಕಿದರೇನು? ತೆಂಗಲೆ ಆದರೇನು ವಡಗಲೆ ಆದರೇನು?
(ಇದರ ಬಗ್ಗೆ ಗೊತ್ತಿಲ್ಲದವರಿಗೆ: ಹಿಂದೂ ಧರ್ಮದ ಅನೇಕಾನೇಕ ಜಾತಿಗಳಲ್ಲಿ ಬ್ರಾಹ್ಮಣ ಒಂದು ಜಾತಿ/ವರ್ಣ. ಅದರಲ್ಲಿ ಇರುವ ಅಸಂಖ್ಯ ಪಂಗಡಗಳಲ್ಲಿ, ಶ್ರೀವೈಷ್ಣವ (ಅಯ್ಯಂಗಾರ್) ಪಂಥವೂ ಒಂದು. ಅದರಲ್ಲಿ ಎರಡು ಬಗೆ ನಾಮ ಧಾರಣೆ ಮಾಡುವ ಸಂಪ್ರದಾಯ. ಒಂದು ಇಂಗ್ಲಿಷಿನ ಯು ಆಕಾರದ್ದಾದರೆ ಇನ್ನೊಂಡಿ ವೈ ಆಕಾರದ್ದು. )
ಸರಿ ಈಗ ವಿವಾದವೆನಪ್ಪಾ ಅಂದರೆ ದೇವರಿಗೆ ಯಾವ ನಾಮ ಹಾಕುವುದು? ಎಂದು. ಈ ವಿವಾದ ನ್ಯಾಯಾಲಯದಲ್ಲಿದೆ. ನಮ್ಮ ದೇಶದಲ್ಲಿ ಹೊಟ್ಟೆಗೆ ಅನ್ನ ಇರಬಹುದು, ಅಗತ್ಯ ವೈದ್ಯಕೀಯ ಸೌಕರ್ಯಗಲಿಲ್ಲದೆ ಹಸುಗೂಸು ಸಾಯಬಹುದು ಆದರೆ ದೇವರಿಗೆ ಹಾಕುವ ನಾಮ ಮಾತ್ರ ಸರಿಯಾಗಿರಬೇಕು. ಇದಕ್ಕಾಗಿ ಅಮೂಲ್ಯವಾದ ನ್ಯಾಯಾಲಯದ ವೇಳೆ ಜನರ ಹಣ ಎಷ್ಟು ಖರ್ಚು?
ಇನ್ನು ನಮ್ಮ ದೇಶದ ಬಗ್ಗೆ ಚಿಂತಿಸಲು ಯಾರಿಗೆ ಸಮಯವಿದೆ ಬಿಡಿ.
ಹೆಚ್ಚಿನ ವಿವರಗಳಿಗೆ
http://prajavani.net/Content/Nov272008/state20081126105589.asp?section=updatenews
Thursday, November 27, 2008
Subscribe to:
Posts (Atom)