Monday, October 6, 2008

ಮೂಲಭೂತವಾದ ಮತ್ತು ಧರ್ಮ

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಾನು ಸರಿ ಅನ್ನುವವರೆಗೂ ಯಾವುದೇ ಸಮಸ್ಯೆ ಉಂಟಾಗದು. ಆದರೆ ತಾನೊಬ್ಬನೇ ಸರಿ ಅಂದಾಗ ಮಾತ್ರ ಸಮಸ್ಯೆಗಳಿ ಉದ್ಭವಿಸುವುದು. ಎಲ್ಲ ಧರ್ಮಗಳೂ ದೇವನೊಬ್ಬನೇ ಎಂದು ಬೋಧಿಸುತ್ತವೆ. ಯಾವ ದೇವರೂ ನಮ್ಮ ದೇವರು ಬೇರೆ ಪರಧರ್ಮೀಯರ ದೇವರು ಬೇರೆ ಎಂದು ಬೋಧಿಸುವುದಿಲ್ಲ. ಆದರೆ ಎಲ್ಲ ಧರ್ಮಗಳೂ ಸಹ ಪರಧರ್ಮೀಯರು ದೇವರನ್ನು ಬಿಟ್ಟು ಬೇರಾರನ್ನೋ ಪೂಜಿಸುತಾರೆ ಎಂದೇ ನಂಬಿರುವುದು. ಬಹುಷಃ ಎಲ್ಲ ಧರ್ಮದಲ್ಲೂ ಈ ರೂಢಿ ಇರಬಹುದು. ಅವರನ್ನು ಕಾಫಿರ್ ಎಂದಾಗಲಿ ಭವಿ ಎಂದಾಗಲಿ ಕೂಗುತಾರೆ. ಅಲ್ಲೇ ಇರುವುದು ಸಮಸ್ಯೆ.

ಲೋಕೋ ಭಿನ್ನ ರುಚಿಃ - ಪ್ರಪಂಚಕ್ಕೆಲ್ಲ ಒಂದೇ ದಾರಿ ಇದ್ದಿದ್ದರೆ ಕಳೆದ ೫೦೦೦ ವರ್ಷಗಳಲ್ಲಿ ನಡೆದ ಧರ್ಮಯುದ್ಧಗಳಿಂದ ಇಷ್ಟರಲ್ಲಿ ಎಲ್ಲ ಧರ್ಮ ಗಳೂ ಅಳಿದು ಒಂದೇ ಧರ್ಮ ಮಾತ್ರ ಉಳಿದಿರಬೇಕಿತ್ತು. ಆದರೆ ಹಾಗೆ ಆಗಿಲ್ಲ. ಬಹುಷಃ ವಿಜ್ಞಾನದ ಪ್ರಗತಿಯಿಂದ ಮುಂದೆ ಒಂದು ದಿನ ಆಡಿನ ಬಂದರೂ ಬರಬಹುದು. ಆದರೆ ಈ ಧರ್ಮರಕ್ಷಕ ಭಯೋತ್ಪಾದಕರಿಂದ ಅಂತೂ ಅದು ಸಾಧ್ಯವಿಲ್ಲ. ವಿದ್ಯಾವಂತ ವಿವೇಕಿ ಸಮಾಜ ಏಕೆ ಇದನ್ನು ಇನ್ನೂ ಅರಿತಿಲ್ಲ.

ಧರ್ಮಾಂಧತೆ ಎಲ್ಲ ಧರ್ಮೀಯರಿಗೂ ಒಂದೇ. ಬಜರಂಗ ದಳವೇ ಇರಲಿ ಲಷ್ಕರ್ ಎ ತೊಯ್ಬ ಇರಲಿ. ಇದು ಸಮಾಜಕ್ಕಂತಿದ ವ್ಯಾಧಿ. ಎರಡೂ ಕ್ಯಾನ್ಸರ್.

No comments: