Wednesday, July 2, 2008

ಗಣ್ಯರ ಸಾವಿನ ಸುತ್ತ ಮುತ್ತ ...

ಇತ್ತೀಚಿಗೆ ನಿಧನರಾದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ಅಂತ್ಯಕ್ರಿಯೆಯ ಸುತ್ತ ಕವಿದಿದ್ದ ವಿವಾದದ ಸಾರ ಸರ್ಕಾರ ವೀರ ಯೋಧನಿಗೆ ಉಚಿತ ಮರ್ಯಾದೆಗಳನ್ನು ಕೊಡದೆ ಅವರಿಗೆ ಅವಮಾನ ಮಾಡಿತು ಎನ್ನುವುದು. ಹಾಗೆ ನೋಡಿದರೆ ಬಹುತೇಕ ಗಣ್ಯರ ಸಾವು ವಿವಾದದಲ್ಲಿ ಇಲ್ಲವೇ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲಿ ಕೊನೆಗಾನುವುದನ್ನು ನಾವು ಕಾಣುತ್ತೇವೆ. ಇಂದಿರಾ ಗಾಂಧಿಯವರ ಸಾವಿನ ನಂತರ ನಡೆದ ಘಟನೆಗಳು ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ನಿಂತಿದೆ. ಒಂದೇ ರಾತ್ರಿಯಲ್ಲಿ ಸುಮಾರು ೨೦೦೦೦ ಸಿಕ್ಕರ ರಕ್ತದಿಂದ ದೆಹಲಿ ನಗರ ತೊಯ್ದು ಹೋಯಿತು. ನಟ ಎಂ.ಜಿ.ಅರ್. ನಿಧನದ ನಂತರ ಆತ್ಮಹತ್ಯೆ ಮಾಡಿಕೊಂಡವ ಸಂಖ್ಯೆ ಎಷ್ಟೋ.

ಡಾ.ರಾಜಕುಮಾರ್ ನಿಧನದ ನಂತರ ಬೆಂಗಳೂರಿನಲ್ಲಿ ನಡೆದ ಘಟನೆಗಳು ಕನ್ನಡಿಗರ ಚರಿತ್ರೆಯಲ್ಲಿ ದಾಖಲಾಗಿದೆ. ಅವಕಾಶವಾದಿ ಸಮಾಜ ಘಾತುಕ ಶಕ್ತಿಗಳು ಇಂತಹ ಸಮಯದ ಪ್ರಯೋಜನವನ್ನು ಹೇಗೆ ಪಡೆದರು ಎನ್ನುವ ವಿಷಯ ನಮಗೆಲ್ಲ ತಿಳಿದಿದೆ. ಈ ಎಲ್ಲ ಸಂಧರ್ಭಗಳಿಂದ ನಾವು ಕಲಿಯಬೇಕಾದೆ ಪಾಠ ಏನಾದರೂ ಇದೆಯೇ ಎನ್ನುವುದು ನಾನು ಚರ್ಚಿಸುತ್ತಿರುವ ವಿಷಯ.

ಭಾರತದಲ್ಲಿ ಸಾಂಪ್ರದಾಯಿಕವಾಗಿ ಸಾವು ಮತ್ತು ಸಾವಿನ ಸಂಬಂಧಿ ವಿಷಯಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಬಗ್ಗೆ ಮಾತನಾದುವುದಿರಲಿ, ಚಿಂತಿಸುವುದೂ ನಿಷಿದ್ಧ. ಇತ್ತೀಚೆಗಷ್ಟೇ ನಾವು ಇನ್ಶುರನ್ಚೆ, ವಿಲ್ ಮುಂತಾದವುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಂದಿಗೂ ನಮ್ಮ ಸಾಂಪ್ರದಾಯಿಕ ಕುಟುಂಬಗಳಲ್ಲಿ ಕುಟುಂಬದ ಮುಖ್ಯಸ್ಥರನ್ನು ವಿಲ್ ಮಾಡಿದ್ದೀರಾ ಎಂದು ಮಕ್ಕಳು ಕೀಳುವ ಧೈರ್ಯ ಮಾಡಲಾರರು. ಅದೇನಿದ್ದರು ವಿವೇಕಿ ಹಿರಿಯರು ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ. ಇಂತಹ ಸಮಾಜದಲ್ಲಿ ನಾನು ಸೂಚಿಸುತ್ತಿರುವ ವಿಷಯ funeral planning ಬಗ್ಗೆ.

ಸರ್ಕಾರ ಗಣ್ಯ ವ್ಯಕ್ತಿಗಳ ನಿಧನಾನಂತರ ನಡೆಯುವ ಕಾರ್ಯಕ್ರಮಗಳನ್ನು ಮೊದಲೇ ನಿರ್ಧರಿಸಿದರೆ ಬಹಳ ಸಮಸ್ಯೆಗಳು ಉಂಟಾಗುವುದೇ ಇಲ್ಲ. ನಿಜ ಎಲ್ಲ ಸಾವೂ ನಿರೀಕ್ಷಿತವಲ್ಲ, ಆದರೆ ಎಲ್ಲರ ಸಾವೂ ಖಚಿತ ತಾನೆ? ಕೆಲವು ಸಂದರ್ಭದಲ್ಲಿ ಗಣ್ಯರು ಹಲವಾರು ದಿನದ ಆಸ್ಪತ್ರೆಯ ವಾಸದ ನಂತರ ನಿಧನರಾದಾಗಳೂ ಸಹ ಅವರ ಅಂತ್ಯಕ್ರಿಯೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಅವರ ಅಂತಿಮ ದರ್ಶನಕ್ಕೆ ಎಷ್ಟು ಜನಬರಬಹುದೆಂಬ ಅಂದಾಜು ನಮಗಿರುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವುದು ನಂತರದ ಮಾತು.

ಇದು ಅತಿ ಸಣ್ಣ ವಿಚಾರ. ಸರ್ಕಾರ ಮಾಡಬೇಕಾದ ಮುಖ್ಯ ಕೆಲಸಗಳು ಇದಕ್ಕಿಂತ ಬಹಳ ಇವೆ ಅಂದಿರಾ? ಅದೂ ನಿಜ ಅನ್ನಿ...

No comments: