ಕಳೆದ ಎರಡು ವಾರದಿಂದ ನನಗೆ ಬ್ಲಾಗಿಸಲು ಸಾಧ್ಯವಾಗಲಿಲ್ಲ. ಕಾರಣ ನನ್ನ ಕಾರ್ಯಕ್ರಮ ಅಲ್ಲ. ಬೆಂಗಳೂರಿನ ವಿದ್ಯುತ್ ಪರಿಸ್ಥಿತಿ. ನಾವು ಜಗತ್ತಿನ ಮುಂದುವರಿದ ರಾಷ್ಟ್ರಗಳ ಜೊತೆ ಮಾಹಿತಿ ತಂತ್ರಜ್ಞಾನ ಮತ್ತು ಇತರೆ ವಿಷಯಗಳಲ್ಲಿ ಪೈಪೋಟಿಗೆ ಇಳಿದಿದ್ದೇವೆ. ಈ ಕ್ಷೇತ್ರಗಳಲ್ಲಿ ನಡೆದಿರುವ ಪ್ರಗತಿಗೆ ನಮಗೆ ನಾವೇ ಬೆನ್ನು ತಟ್ಟಿ ಕೊಳ್ಳುತ್ತೇವೆ. ಆದರೆ ಒಂದು ತಿಂಗಳು ಮಳೆ ಬಾರದಿದ್ದರೆ ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ.
ನಮ್ಮ ರಸ್ತೆಗಳು ಸುಧಾರಿಸಲು ಇನ್ನೂ ೫ ವರ್ಷ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ವಿದ್ಯುತ್ ಈ ಎಲ್ಲ ಕ್ಷೇತ್ರಗಳ ಜೀವ ನಾಡಿ. ಬರೀ ಕಛೇರಿಗಳಲ್ಲಿ ಜನರೇಟರ್ ಇದ್ದರೆ ಸಾಕೆ? ಅದಕ್ಕೆ ಡೀಸಲ್ ಬೇಕಲ್ಲ. ಮತ್ತು ಮನೆಯಲ್ಲಿ ಕೆಲಸ ಮಾಡುವವರ, ಸಣ್ಣ ಪ್ರಮಾಣದ ಉದ್ದಿಮೆ ನಡೆಸುವವರ ಪಾಡೇನು?
ಕಳೆದ ತಿಂಗಳು ಗುಜರಾತ್ ಮುಖ್ಯ ಮಂತ್ರಿ ಮೋದಿ ಗುಜರಾತ್ ಕೇಂದ್ರಕ್ಕೆ ಕೊಡುತ್ತಿರುವ ಹಣದಬಗ್ಗೆ ಮತ್ತು ಅದಕ್ಕೆ ಆ ರಾಜ್ಯಕ್ಕೆ ಸಿಗುತ್ತಿರುವ ಸುಕರ್ಯಗಳ ಬಗ್ಗೆ ಮಾತನಾಡಿದರು. ಕಳೆದ ವಾರ ನನ್ನ ಸ್ನೇಹಿತನೊಬ್ಬ ತನ್ನ ಮನೆಯ ಸುತ್ತ ಇರುವ ರಸ್ತೆಯ ಪರಿಸ್ಥಿತಿಯ ಬಗ್ಗೆ ಇದೇ ತರಹದ ಮಾತನಾಡಿದ. ಕಳೆದ ವರ್ಷದಲ್ಲಿ ನಾನೊಬ್ಬನೇ ಸುಮಾರು ೧೦ ಲಕ್ಷ ಆದಾಯ ತೆರಿಗೆ ಪಾವತಿ ಮಾಡಿದ್ದೇನೆ. ಬರೀ ನನ್ನ ಹಣದಿಂದಲೇ ಈ ರಸ್ತೆಯ ದುರಸ್ತಿ ಸಾಧ್ಯವಾಗುತ್ತಿತ್ತು. ಈ ಬಗ್ಗೆ ನಾವು ಯೋಚಿಸಬೇಕಲ್ಲವೇ?
Tuesday, August 5, 2008
Subscribe to:
Post Comments (Atom)
No comments:
Post a Comment